Slide
Slide
Slide
previous arrow
next arrow

ಸ್ಪರ್ಧೆಯಲ್ಲಿ ಗೆದ್ದ ಹಣವನ್ನು ಅನಾಥಾಶ್ರಮಕ್ಕೆ ನೀಡಿ ಮಾದರಿಯಾದ ಮಹಿಳೆಯರು

300x250 AD

ಬನವಾಸಿ: ಇತ್ತೀಚಿಗೆ ಪಟ್ಟಣದಲ್ಲಿ ನಡೆದ ಕದಂಬೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಆಟೋಟ ಸ್ಪರ್ಧೆಯಲ್ಲಿ ಮಹಿಳಾ ವಿಭಾಗದ ಹಗ್ಗ ಜಗ್ಗಾಟ ಕ್ರೀಡೆಯಲ್ಲಿ ದ್ವೀತಿಯ ಸ್ಥಾನ ಗಳಿಸಿದ ಇಲ್ಲಿನ ಜಿ.ಎಸ್. ಪಿಳ್ಳೈ & ಗ್ರೂಪ್‌‌ನ ಮಹಿಳಾ ತಂಡದ ಸದಸ್ಯರು ತಮಗೆ ದೊರೆತ ಬಹುಮಾನ ಮೊತ್ತ 11,111 ರೂ. ಮೊತ್ತವನ್ನು ಸಿದ್ದಾಪುರದ ಪುನೀತ್ ರಾಜ್‍ಕುಮಾರ್ ಆಶ್ರಯಧಾಮ ಅನಾಥಶ್ರಮ ಸೇವಾ ಸಮಿತಿಗೆ ವಿತರಿಸುವ ಮೂಲಕ ಸಮಾಜಕ್ಕೆ ಮಾದರಿಯಾದರು.

ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಅಯೋಗ ಆರ್.ಕೆ.ಫೌಂಡೇಶನ್ ನ ಬನವಾಸಿ ಘಟಕದ ಅಧ್ಯಕ್ಷ ಸುಧೀರ್ ನಾಯರ್, ಜಿ.ಎಸ್ ಪಿಳ್ಳೈ & ಗ್ರೂಪ್‌ನ ಸಂಸ್ಥಾಪಕಿ ಪೂರ್ಣಿಮಾ ಗುಣಶೇಖರ ಪಿಳ್ಳೈ, ಚೇತನಾ ಎಸ್.ನಾಯರ್, ಶ್ರೀಮತಿ ಹೆಗಡೆ, ದಿವ್ಯಾಭಾರತಿ ಪಿಳ್ಳೈ, ಜಯಶ್ರೀ ಶೆಟ್ಟಿ, ದರ್ಶನ ಪಿಳ್ಳೈ, ದೀಕ್ಷಾ ನಾಯರ್, ನಂದನ್, ಗಾನವಿ ಇದ್ದರು

300x250 AD
Share This
300x250 AD
300x250 AD
300x250 AD
Back to top